ಒಬ್ಬ ಗುರುವಿಗೆ ಸಮಸ್ಯೆ ಎದುರಾದಾಗ ಅವರ ಶಿಷ್ಯಂದಿರುವ ಒಂದು ಟೀಮ್ ಕಟ್ಟಿಕೊಂಡು ತಮ್ಮ ಗುರುವಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಾರೆ. ಮನುಷ್ಯನಿಗೆ ವಿದ್ಯೆ ಬಹಳ ಮುಖ್ಯವಾದುದು ವಿದ್ಯೆ ಎನ್ನುವುದು ಆತನಿಗೆ ಎಲ್ಲವನ್ನು ದೊರಕಿಸಿ ಕೊಡುತ್ತದೆ ಎಂಬುದನ್ನು ಹೇಳುವಂಥಹ ಹೊಸ ಚಿತ್ರ ಕೆ.ಕೆ.ಟೀಮ್ ಈ ಚಿತ್ರದ ಮುಹೂರ್ತದ ಸಮಾರಂಭ ಕಳೆದ ವಾರ ಹಂಪಿನಗರದ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರದ ಮೊದಲ ದೃಶ್ಯಕ್ಕೆ ಅಶೋಕ್ ಲಂಬಾಣಿ ಕ್ಲಾಪ್ ಮಾಡಿದರು. ವಿಜಯ್ ಕ್ಯಾಮರಾ ಸ್ವಿಚ್ ಆನ್ ಮಾಡಿದರು. ಈ ಹಿಂದೆ ಶ್ರೀ ಅಮರೇಶ್ವರ ಮಹಾತ್ಮೆ ಚಿತ್ರವನ್ನು ನಿರ್ಮಿಸಿದ್ದ ಬಸವರಾಜ್ ಹೀರೇಮಠ್ ಅವರು ಕಥೆ, ಚಿತ್ರಕಥೆ ರಚಿಸಿ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಬಿಜಾಪುರ, ಬಾಗಲಕೋಟೆ, ರಾಯಚೂರು, ಕಾರವಾರ ಮಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಖೊಖೋ ಆಟವು ಒಂದು ಪ್ರಮುಖ ಆಟವಾಗಿ ಬರಲಿದೆ. ಎ.ಎಂ.ಪ್ರೊಡಕ್ಷನ್ ಲಾಂಛನದಲ್ಲಿ ಸಂತೋಷ್ ಕುಮಾರ್ ಸಕಲೇಶಪುರ, ಬಸವರಾಜ್ ಹಿರೇಮಠ್ ಮತ್ತು ಸುನೀಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಿದ್ದಾರ್ಥ, ಪುರಂದರ ಶೆಟ್ಟಿಗಾರ್ ಸಂಗೀತ ವಿಜಯ್ ಛಾಯಾಗ್ರಹಣ, ರಾಜ್ಮಯೂರ್ ಹಿರೇಮಠ್ ಸಂಭಾಷಣೆ ಮತ್ತು ಸಹ ನಿರ್ದೇಶನ ಮದನ್ ಹರಿಣಿ ನೃತ್ಯ ನಿರ್ದೇಶನ ತಕ್ಕೋಡ್ ಸಣ್ಣಪ್ಪ ಸಾಹಸವಿದೆ. ಅಂಜನ್, ಮನು ಹುಬ್ಬಳ್ಳಿ, ಸಾಗರ್ ಅಹಲ್ಯ, ಸ್ನೇಹ, ಮನು ಸುಮೇದ್, ಬಸವರಾಜ್, ಶ್ರೀರಾಮ್, ಗೋವಿಂದ, ಕಬ್ಬಿನಾಲೆ ಸಂತೋಷ್ ಫಯಾಜ್, ಸರ್ವೇಶ್ ತಾರಾಬಳಗದಲ್ಲಿದ್ದಾರೆ.